ಉಡುಪಿಮಿತ್ರ ಪತ್ರಿಕೆ ಸುದ್ದಿ :
ಯುವ ಸಮುದಾಯ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡು ಸಮಾಜ ಪರಿವರ್ತನೆಯಲ್ಲಿ ಮಹತ್ತರ ಪಾತ್ರ ವಹಿಸಬೇಕೆಂದು ಮೂಡ ಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ಅವರು ಬ್ರಹ್ಮಾವರ ಗಾಂಧಿಮೈದಾನದಲ್ಲಿ ನಡೆದ ಅಭಿಮತ ಸಂಭ್ರಮ ಕಾರ್ಯಕ್ರಮ ವಹಿಸಿ ಮಾತನಾಡಿದರು.
ಸೌಂದರ್ಯಪ್ರಜ್ಞೆ ಇರುವವರು ಕಲೆ ಕಲಾವಿದರು, ದೇಶವನ್ನು ಪ್ರೀತಿಸುತ್ತಾರೆ. ಆದ್ದರಿಂದ ಪ್ರತಿಯೊಬ್ಬರು ಸೌಂದರ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂದು ನುಡಿದರು. ಉದ್ಘಾಟನೆಯನ್ನು ಎಂಆರ್ ಜಿ ಗ್ರೂಫ್ ನ ಸ್ಥಾಪಕರಾದ ಡಾ. ಕೆ. ಪ್ರಕಾಶ ಶೆಟ್ಟಿ ವಹಿಸಿದ್ದು ಅವರು ಮಾತನಾಡಿ ಅದೃಷ್ಟದ ಜೊತೆಯಲ್ಲಿ ಪ್ರಯತ್ನ ಇದ್ದಾಗ ಸಾಧನೆಯ ಮೆಟ್ಟಿಲೇರಲು ಸಾಧ್ಯ ಎಂದರು.
ಅಭಿಮತ ಕಾರ್ಯಕ್ರಮ ಎಲ್ಲರಿಗೂ ಮಾದರಿ : ಕೃಷ್ಣಮೂರ್ತಿ ಮಂಜ
ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಮಾತನಾಡಿ ಅಂದು ನನ್ನ ಮೂಲಕ ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಒಂದು ತಂಡ ಹೆಮ್ಮರವಾಗಿ ಬೆಳೆದು ನಿಂತದ್ದು ನನಗೆ ಸಂತೋಷ ತಂದಿದೆ. ಅಭಿಮತ ತಂಡ ಒಂದಷ್ಟು ಸಮಾಜ ಸೇವಾ ಚಟುವಟಿಕೆಗಳೊಂದಿಗೆ ಅತ್ಯತ್ತಮ ಶಿಸ್ತುಬದ್ಧ ತಂಡವಾಗಿ ಬೆಳೆದು ನಿಂತಿದ್ದು ಅನೇಕ ಸಾಧಕರನ್ನು ಗುರುತಿಸುತ್ತಿರುವುದು ಹೆಮ್ಮೆಯ ಸಂಗತಿ. ಅಭಿಮತ ತಂಡದ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಹುಟ್ಟೂರ ಸನ್ಮಾನವೆಂದು ಭಾವಿಸುವೆ : ಆನಂದ ಸಿ. ಕುಂದರ್
ಕೀರ್ತಿಕಲಶ ಪುರಸ್ಕಾರ ಸ್ವೀಕರಿಸಿದ ಗೀತಾನಂದ ಫೌಂಡೇಶ್ನ್ ಪ್ರವರ್ತಕ ಆನಂದ ಸಿ.ಕುಂದರ್ ಮಾತನಾಡಿ ಶಿಕ್ಷಣದಿಂದ ಯಾರೂ ವಂಚಿತರಾಗುವುದು ಸರಿಯಲ್ಲ. ನಮ್ಮ ಬಾಲ್ಯದಲ್ಲಿ ಅನೇಕರು ಆರ್ಥಿಕ ಸಮಸ್ಯೆಯ ಕಾರಣದಿಂದ ಶಿಕ್ಷಣದಿಂದ ವಂಚಿತರಾಗಿದ್ದರು. ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದಲೇ ಗೀತಾನಂದ ಫೌಂಡೇಶನ್ ಆರಂಭಿಸಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ. ಅಭಿಮತ ತಂಡ ಕಿರ್ಥಿಕಲಶ ಪುರಸ್ಕಾರದೊಂದಿಗೆ ಸನ್ಮಾನಿಸಿರುವುದು ಸಂತೋಷ ನೀಡಿದ್ದು ಈ ಪುರಸ್ಕಾರವನ್ನು ಹುಟ್ಟೂರ ಸನ್ಮಾನವೆಂದು ಭಾವಿಸಿಕೊಂಡಿದ್ದೇನೆ ಎಂದರು.

ಮುಖ್ಯ ಅತಿಥಿಗಳಾಗಿ ಬರೋಡದ ಉದ್ಯಮಿ ಶಶಿಧರ ಶೆಟ್ಟಿ, ಮಾರಣಕಟ್ಟೆಯ ಎಂ.ಎಸ್. ಮಂಜ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಭುವನೇಶ್ವರಿ ಕನ್ಟ್ರಕ್ಷನ್ಸ್, ಬೆಂಗಳೂರು ಇದರ ಮಾಲಕ ಪ್ರಶಾಂತ ಶೆಟ್ಟಿ, ಅಂಜಲಿಸ್ ವಿಜಯಲಕ್ಷ್ಮೀ ಸಾರೀಸ್ ಮಾಲಕಿ ಅಂಜಲಿ ವಿಜಯ್, ಲೈಫ್ ಲೈನ್ ಫೀಡ್ ಸಿಎಂಡಿ ಕಿಶೋರ್ ಕುಮಾರ್ ಹೆಗ್ಡೆ, ಮುಂಬೈನ ಹೋಟೆಲ್ ಉದ್ಯಮಿ ಅಶೋಕ ಶೆಟ್ಟಿ, ಬೆಳ್ಳಾಡಿ, ಕರಕುಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ, ಗಿಳಿಯಾರು ಕುಶಲ ಹೆಗ್ಡೆ ಮೆಮೊರಿಯಲ್ ಚಾರಿಟೆಬಲ್ ಟ್ರಸ್ಟ್ (ರಿ.), ಪ್ರವರ್ತಕ ಉದಯ ಹೆಗ್ಡೆ, ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ), ಬೆಂಗಳೂರು ಇದರ ಅಧ್ಯಕ್ಷ ಡಾ. ದೀಪಕ್ಕುಮಾರ್ ಶೆಟ್ಟಿ, ಬಾರ್ಕೂರು ಉಪಸ್ಥಿತರಿದ್ದರು.
ಹಾರಾಡಿಯ ಭೂಮಿಕಾ ತಂಡದ ನಿರ್ದೇಶಕ ರಾಮ ಶೆಟ್ಟಿ, ಡಾ.ಸಬಿತಾ ಕೊರಗ, ಸಾಲಿಗ್ರಾಮದ ಡಾ. ಪಿ ಸಿ ಸುಧಾಕರ ರವರಿಗೆ ಯಶೋಗಾಥೆ ಪುರಸ್ಕಾರ ಹಾಗೂ ಆನಂದ ಸಿ.ಕುಂದರ್ ರವರಿಗೆ ಕೀರ್ತೀ ಕಳಸ ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.
ಜಾನುವಾರುಕಟ್ಟೆ ಶಾಲಾ ಮಕ್ಕಳ ಸಮವಸ್ತ್ರಕ್ಕಾಗಿ ರೂ.೫೦೦೦೦ ಮೊತ್ತದ ಚೆಕ್ ಹಸ್ತಾಂತರಿಸಲಾಯಿತು.
ಜನಸೇವಾ ಟ್ರಸ್ಟ್ ಸಂಚಾಲಕ ವಸಂತ್ ಗಿಳಿಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅನ್ವಿತಾ ಮೂರ್ತಿ ಪ್ರಾರ್ಥಿಸಿದರು. ಬೆಂಗಳೂರಿನ ಅಭಿನಂದನ ಸಾಂಸ್ಕೃತಿಕ ಟ್ರಸ್ಟ್ (ರಿ.) ಸ್ಥಾಪಕ ರಾಘವೇಂದ್ರ ಕಾಂಚನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ರಘುದೀಕ್ಷಿತ್ ಸಂಗೀತ ಲೈವ್ ಕಾನ್ಸಲ್ಟ್ ಹಾಗೂ ಡಾ.ಮಂಜರಿ ಚಂದ್ರಪುಷ್ಪರಾಜ್ರವರಿಂದ ನೃತ್ಯ ಸಂಚಯ ಕಾರ್ಯಕ್ರಮ ಜರುಗಿತು. ಬ್ರಹ್ಮಾವರದ ಇತಿಹಾಸದಲ್ಲೇ ‘ಅಭಿಮತ ಸಂಭ್ರಮ’ ಕಾರ್ಯಕ್ರಮ ಅತಿ ಹೆಚ್ಚು ಜನಸೇರಿದ ಕಾರ್ಯಕ್ರಮವಾಗಿ ಕಂಡು ಬಂತು.
ವರದಿ : ಚಿತ್ತೂರು ಪ್ರರಾಕರ ಆಚಾರ್ಯ
