ಉಡುಪಿಮಿತ್ರ ಪತ್ರಿಕೆ ವೆಬ್ಸೈಟ್ ಸುದ್ದಿ:
ಚಿತ್ತೂರು ಜ.೨೪ : ಯಾವುದೇ ಊರಿನ ಅಭಿವೃದ್ಧಿಯ ಬಗ್ಗೆ ಸಾರ್ವಜನಿಕರೆಲ್ಲರಿಗೂ ಕಾಳಜಿ ಇರಬೇಕು. ಆಗ ಆ ಊರು ಮಾದರಿ ಊರಾಗಲು ಸಾಧ್ಯವಿದೆ. ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಕ್ಷೇತ್ರದಿಂದ ಚಿತ್ತೂರು ಯಾತ್ರಾ ಸ್ಥಳವಾಗುತ್ತಿದೆ. ನಮ್ಮ ಊರು ಮಾದರಿ ಊರು ಆಗಬೇಕು ಇಲ್ಲಿನ ವ್ಯವಸ್ಥೆಗಳು ಕೂಡ ಮಾದರಿಯಾಗಬೇಕು ಎನ್ನುವ ನೆಲೆಯಲ್ಲಿ ಇಲ್ಲಿಯ ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು, ಜನರು ಕೆಲಸ ಮಾಡುತ್ತಿದ್ದಾರೆ. ಎಲ್ಲರ ಸಹಕಾರದಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಗೊಳ್ಳುತ್ತಿರುವುದು ಸಂತಸದ ಸಂಗತಿ. ಇದಕ್ಕೆ ಎಲ್ಲರೂ ಸಹಕಾರ ನೀಡಿದ್ದು ಅವರಿಗೆ ಕೃತಜ್ಞತೆ ಅರ್ಪಿಸಿಕೊಳ್ಳುತ್ತೇನೆಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಡಾ. ಅತುಲ್ ಕುಮಾರ್ ಶೆಟ್ಟಿ ನುಡಿದರು. ಅವರು ಜನವರಿ ೨೪ರಂದು ಚಿತ್ತೂರು ಗ್ರಾಮ ಪಂಚಾಯಿತಿನ ನೂತನ ಕಟ್ಟಡದ ಆಡಳಿತ ಕಚೇರಿ ಉದ್ಘಾಟಿಸಿ ಮಾತನಾಡುತ್ತಿದ್ದರು
ಪ್ಲಾಸ್ಟಿಕ್ ಸುಟ್ಟಲ್ಲಿ ಅದರಿಂದ ವಿಷ ಅನಿಲ ಉತ್ಪತ್ತಿಯಾಗಿ ಪರಿಸರದ ಮೇಲೆ ಹಾನಿಯಾಗುತ್ತದೆ. ಪ್ಲಾಸ್ಟಿಕ್ ಸುಡುವುದು ಕೂಡ ಶಿಕ್ಷಾರ್ಹ ಅಪರಾಧ. ಜನರು ಪ್ಲಾಸ್ಟಿಕ್ ಗಳನ್ನು ಸುಡದೆ ಎಸ್ ಎಲ್ ಆರ್ ಎಂ ಘಟಕಕ್ಕೆ ನೀಡಬೇಕೆಂದು ಅವರು ನುಡಿದರು
ನೂತನ ಕಟ್ಟಡವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉದ್ಘಾಟಿಸಿದ್ದು ಅವರು ಮಾತನಾಡುತ್ತಾ ಸುಮಾರು ೪೫ ಲಕ್ಷ ವೆಚ್ಚದಲ್ಲಿ ಕಟ್ಟಡವನ್ನು ಮತ್ತು ಒಳಾಂಗಣ ವಿನ್ಯಾಸವನ್ನು ಮಾಡಲಾಗಿದೆ. ಅನೇಕ ದಾನಿಗಳು ಬೇರೆಬೇರೆ ಕೊಡುಗೆಗಳನ್ನು ನೀಡಿದ್ದು ಸಹಕರಿಸಿದ ಪ್ರತಿಯೊಬ್ಬರಿಗೂ ಈ ಸಂದರ್ಭ ಕೃತಜ್ಞತೆ ಅರ್ಪಿಸಿಕೊಳ್ಳುತ್ತೇನೆಂದು ನುಡಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೊಠಡಿಯನ್ನು ತಾಲೂಕು ಪಂಚಾಯತ್ ಮಾಜಿ ಸದಸ್ಯ ಉದಯ ಜಿ ಪೂಜಾರಿ, ಅಧ್ಯಕ್ಷರ ಕೊಠಡಿಯನ್ನು ರಘುರಾಮ್ ಶೆಟ್ಟಿ ಗುಡಿಗೇರಿ ಉದ್ಘಾಟಿಸಿದರು. ಅಭಿಲೇಕ ಆಲಯವನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಇಂದಿರಾ ಶೆಟ್ಟಿ, ಉದ್ಘಾಟಿಸಿದರು. ಈ ಸಂದರ್ಭ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಬ್ಬು, ಗ್ರಾಮ ಪಂಚಾಯತ್ ಸದಸ್ಯರಾದ ದಿವಾಕರ ಆಚಾರ್ಯ, ಚಂದ್ರಶೇಖರ್ ಶೆಟ್ಟಿ, ಸಿಡಿ ಮಂಜುನಾಥ, ಜಯಂತಿ ಪೂಜಾರಿ, ಶ್ರೀಮತಿ ವಸಂತಿ, ಶ್ರೀಮತಿ ಕಲಾವತಿ ಶೆಟ್ಟಿ ಉಪಸ್ಥಿತರಿದ್ದರು. ನೂತನ ಕಟ್ಟಡ ಉದ್ಘಾಟನೆ ಸಂದರ್ಭ ವಂಡ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಅಡಿಕೆ ಕೊಡ್ಲು, ವಂಡವಳ್ಳಿ ಜಯರಾಮ ಶೆಟ್ಟಿ, ಸಂಜೀವ್ ಪೂಜಾರಿ ವಂಡ್ಸೆ, ರಾಮಚಂದ್ರ ಮಂಜ ಮಾರಣಕಟ್ಟೆ, ಗೋವರ್ಧನ್ ಜೋಗಿ, ಶಂಕರ ಭಟ್ ಮಾರಣಕಟ್ಟೆ, ನಾಗರಾಜ ಮಂಜ ಮಾರಣಕಟ್ಟೆ, ವಿ.ಕೆ.ಶಿವರಾಮ ಶೆಟ್ಟಿ ವಂಡ್ಸೆ, ನಾಗರಾಜ ಶೆಟ್ಟಿ ಕೈಲಾಡಿ, ರವೀಂದ್ರ ಶೆಟ್ಟಿ ಇಡೂರು ಇನ್ನಿತರರು ಭಾಗವಹಿಸಿ ಶುಭ ಹಾರೈಸಿದರು. ಪಿಡಿಒ ಶ್ರೀಮತಿ ಸುಶೀಲ ಧನ್ಯವಾದ ಅರ್ಪಿಸಿದ್ದು ಕಾರ್ಯದರ್ಶಿ ಗಣೇಶ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.




