• March 26, 2026
  • Last Update March 24, 2026 3:28 pm
  • Brahmavara

ಡಿ.20ರಂದು ತೆಕ್ಕಟ್ಟೆಯಲ್ಲಿ ಮರೆಯಲಾರದ ಹಾಡುಗಳ ಪ್ರಸ್ತುತಿ

ಡಿ.20ರಂದು ತೆಕ್ಕಟ್ಟೆಯಲ್ಲಿ ಮರೆಯಲಾರದ ಹಾಡುಗಳ ಪ್ರಸ್ತುತಿ
  • ಉಡುಪಿ ಮಿತ್ರ ಪತ್ರಿಕೆ ಸುದ್ದಿ :
    ಕೋಟ: ಕೋಟ ಸಮುದ್ಯುತಾ ಸಂಸ್ಥೆಯ ನೇತೃತ್ವದಲ್ಲಿ ಡಾ.ಸಿ.ಅಶ್ವಥ್ ಅವರ ಸ್ಮರ ಸಂಯೋಜನೆಯ ಗೀತೆಗಳ ಮಧುರ ಪ್ರಸ್ತುತಿಯ ಸತ್ಯವತಾರ ಕಾರ್ಯಕ್ರಮ ಡಿ.20ರಂದುಸಂಜೆ ಗಂಟೆ 5.೦೦ ರಿಂದ ನಡೆಯಲಿದೆ ಎಂದು ರಾಘವೇಂದ್ರ ಕಾಂಚನ್ ತಿಳಿಸಿದರು. ಕೊಟದ. ಸಮುದ್ಯುತಾ ಸಭಾಂಗಣಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
  • https://youtu.be/51vQ6B-KKU8?si=90c730KDb_DlKkCZ
    ಕಾರ್ಯಕ್ರಮದಲ್ಲಿ ಡಾ.ಸಿ.ಅಶ್ವಥ್ ಅವರ ಕಂಠ ಮಾಧುರ್ಯದಲ್ಲಿ ಕೇಳುಗರ ಮನ ತಲುಪಿದ್ದ ಹಾಗೂ ಅವರದೇ ಶೈಲಿಯಲ್ಲಿ ರಾಗ ಸಂಯೋಜನೆಗೊಂಡಿದ್ದ ಮರೆಯಲಾರದ ಹಾಡುಗಳನ್ನು ಗಾಯಕರು ಪ್ರಸ್ತುತ ಪಡಿಸಲಿದ್ದಾರೆ. ಎಂ.ಡಿ.ಪಲ್ಲವಿ, ರಾಮಚಂದ್ರ ಹಡಪದ ಹಾಗೂ ಕರಾವಳಿಯ ಪ್ರತಿಭೆ ಮೇಘನಾ ಕುಂದಾಪುರ ಹಾಡುಗಳನ್ನು ಹಾಡಲಿದ್ದಾರೆ. ಡಾ.ಸಿ.ಅಶ್ವಥ್ ಅವರ ಒಡನಾಡಿಗಳಾಗಿದ್ದ ಬಿ.ಆರ್.ಲಕ್ಷಣ ರಾವ್, ಟಿ.ಎಸ್.ನಾಗಾಭರಣ, ಜೋಗಿ, ಡಾ.ವಿ.ನಾಗೇಂದ್ರಪ್ರಸಾದ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಳ್ಳಲಿದ್ದಾರೆ. ನ್ಯೂಸ್ ಫಸ್ಟ್ ಆಡಳಿತ ನಿರ್ದೇಶಕ ರವಿಕುಮಾರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
    ಪ್ರಸಿದ್ಧ ನಿರೂಪಕ ರಾಘವೇಂದ್ರ ಕಾಂಚನ್ ಅವರ ನಿರೂಪಣೆಯಲ್ಲಿ ಸುಮಾರು 2 ಗಂಟೆ 30 ನಿಮಿಷಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ಉಚಿತವಾಗಿದ್ದು, ಕಾರ್ಯಕ್ರಮ ನಿಗದಿತ ಸಮಯಕ್ಕೆ ಪ್ರಾರಂಭವಾಗಲಿದೆ ಎಂದು ಸಮುದ್ಯುತಾ ಗ್ರೂಫ್‌ನ ಸಂದೀಪ್ ಶೆಟ್ಟಿ ನುಡಿದರು.
    ಪತ್ರಿಕಾಗೋಷ್ಟಿಯಲ್ಲಿ ಉದಯಕುಮಾರ್ ಶೆಟ್ಟಿ ಪಡುಕೆರೆ, ಯೋಗೇಂದ್ರ ತಿಂಗಳಾಯ, ಹರೀಶ್, ಗಿರೀಶ್ ಬಂಗೇರ ಇದ್ದರು.
administrator

Related Articles

Leave a Reply

Your email address will not be published. Required fields are marked *

You cannot copy content of this page