ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಫೆ.೨೩ : ಚಾಂತಾರು ಅಗ್ರಹಾರ ಉಪ್ಪರಿಗೆಮನೆ ಗಿರಿಜ ಜಗನ್ನಾಥ ಶೆಟ್ಟಿ (83) ಫೆ.21 ರಂದು ರಾತ್ರಿ ನಿಧನರಾದರು.ಮೃತರು ದಾವಣಗೆರೆಯ ಶಿವಾನಿ ಗ್ರೂಪ್ ಆಪ್ ಹೋಟೆಲ್ಸ್ ಮಾಲಕ ಪ್ರಭಾಕರ ಶೆಟ್ಟಿ ಸಹಿತ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಗಿರಿಜ ಶೆಟ್ಟಿಯವರು ಶೋಭಾನೆ ಹಾಡುಗಳ ಸಹಿತ ಸಾಕಷ್ಟು ಜನಪದ ಹಾಡುಗಳನ್ನು ಕಂಠಪಾಠ ಮಾಡಿಕೊಂಡಿದ್ದು ಮದುವೆ ಹಾಗೂ ಸೀಮಂತ ಸಮಾರಂಭಗಳಲ್ಲಿ ಹಾಡುತ್ತಿದ್ದರು. ಕೃಷಿಯಲ್ಲಿಯೂ ಅಪಾರ ಅನುಭವ ಹೊಂದಿದ್ದರು.




