ಉಡುಪಿಮಿತ್ರ ಪತ್ರಿಕೆ ಸುದ್ಧಿ :
ನಾವುಂದ, ಫೆ.೨೦: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ನಾವುಂದ ಇದರ ಮುಂದಿನ ೫ ವರ್ಷಗಳ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನಾವುಂದ ಹಕ್ಕಾಡಿಮನೆ ಜಗದೀಶ್ ಪೂಜಾರಿ ಉಪಾಧ್ಯಕ್ಷರಾಗಿ ಯರುಕೋಣೆ ರಾಗಿಹಕ್ಲು ಸತೀಶ್ ಕುಮಾರ್ ಶೆಟ್ಟಿ ಆಯ್ಕೆಯಾಗಿರುತ್ತಾರೆ.
ಫೆ.೨೦ರಂದು ಆಯ್ಕೆ ಪ್ರಕ್ರಿಯೆ ನಡೆದಿದ್ದು ಈ ಸಂದರ್ಭ ನಿರ್ದೇಶಕರಾದ ನರಸಿಂಹ ದೇವಾಡಿಗ ನಾವುಂದ, ಗಣೇಶ್ ಪೂಜಾರಿ ನಾವುಂದ, ಶ್ರೀನಿವಾಸ ಪೂಜಾರಿ ಹೇರೂರು, ಹರೀಶ್ಚಂದ್ರ ಆಚಾರ್ಯ ಚಿಕ್ತಾಡಿ ಹೇರೂರು, ಪ್ರಭಾಕರ ಎಂ.ಖಾರ್ವಿ ಮರವಂತೆ, ಗಣೇಶ್ ಪೂಜಾರಿ ಮರವಂತೆ, ವೀರೇಂದ್ರ ಹೆಗ್ಡೆ ಯರುಕೋಣೆ ಹೇರೂರು, ಲಕ್ಷ್ಮೀ ದೇವಾಡಿಗ ನಾವುಂದ, ಶಕುಂತಲಾ ಮರವಂತೆ, ಸುರೇರ್ಶ ನಾಯ್ಕ್ ಹೇರೂರು, ರಾಮ ಕಂತಿಹೊಂಡ ನಾವುಂದ ಉಪಸ್ಥಿತರಿದ್ದರು. ಚುನಾವಣಾಧಿಕಾರಿ ಸುನೀಲ್ಕುಮಾರ್ ಸಿ.ಎಮ್. ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಅಳಿವೆಗದ್ದೆ ಉಪಸ್ಥಿತರಿದ್ದರು.
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
