ಉಡುಪಿಮಿತ್ರ ಪತ್ರಿಕೆ ಸುದ್ದಿ :
ಬ್ರಹ್ಮಾವರ,ಅ.೬: ಮಹೋತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹಾರಾಡಿ ನಿತ್ಯಾನಂದ ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಬ್ರಹ್ಮಾವರ ಅಜಪುರ ಕರ್ನಾಟಕ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಉಡುಪಿ ತಾಲೂಕು ಪಂಚಾಯತ್ನ ಅಧ್ಯಕ್ಷರಾಗಿ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದಲ್ಲದೆ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುತ್ತಾರೆ.

ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಬಿ. ವಿಜಯ ನಾಯರಿ ಚಾಂತಾರು, ಕೆ.ಪದ್ಮನಾಭ ಕಾಂಚನ್, ಉಮೇಶ್ ಪೂಜಾರಿ ಚಾಂತಾರು, ಚಂದ್ರಶೇಖರ ದೇವಾಡಿಗ ದೇವಾಡಿಗರಬೆಟ್ಟು, ಶ್ರೀಮತಿ ಇಂದಿರಾವತಿ ವಾರಂಬಳ್ಳಿ, ಶ್ರೀಮತಿ ಸರಸ್ವತಿ ನಾಯ್ಕ್ ಚಾಂತಾರು, ಚಂದ್ರಶೇಖರ ಮಟಪಾಡಿ, ಎಚ್.ಶಿವರಾಮ ಭಟ್ ಹಂದಾಡಿ, ಆಯ್ಕೆಯಾಗಿದ್ದಾರೆ.



