• June 29, 2025
  • Last Update June 29, 2025 10:13 am
  • Brahmavara

ಮಾರಣಕಟ್ಟೆ ಕ್ಷೇತ್ರದ ಹಿರಿಯ ಅರ್ಚಕಎಮ್.ಎನ್.ಚಂದ್ರಶೇಖರ ಮಂಜ ನಿಧನ

ಮಾರಣಕಟ್ಟೆ ಕ್ಷೇತ್ರದ ಹಿರಿಯ ಅರ್ಚಕಎಮ್.ಎನ್.ಚಂದ್ರಶೇಖರ ಮಂಜ ನಿಧನ

ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಚಿತ್ತೂರು, ಜೂ.೧೦: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಹಿರಿಯ ಅರ್ಚಕ ಎಮ್.ಎನ್. ಚಂದ್ರಶೇಖರ ಮಂಜರವರು ಜೂ.೮ ರಂದು ರಾತ್ರಿ ನಿಧನರಾದರು. ಅವರು ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಮೃತರು ಪುತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಳದ ಅರ್ಚಕ ಶ್ರೀ ಮಹೇಶ್ ಮಂಜ ಸೇರಿದಂತೆ ಪತ್ನಿ, ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಎಮ್.ಎನ್.ಚಂದ್ರಶೇಖರ ಮಂಜರು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು 45 ವರ್ಷಗಳಿಂದ ಅರ್ಚಕರಾಗಿ ಸೇವೆ ಸಲಿಸಿದ್ದರು. ಹಿರಿಯ ಅರ್ಚಕರಾಗಿ ನಯ ವಿನಯದಿಂದ ಸಾರ್ವಜನಿಕರೊಂದಿಗೆ ಬೆರೆಯುತ್ತಾ ಸರ್ವರಿಗೂ ಒಳಿತನ್ನು ಹಾರೈಸುತ್ತಿದ್ದ ಇವರ ನಿಧನಕ್ಕೆ ಹಲವಾರು ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.


ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಹೈದರಬಾದ್‌ನ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶಿಯ ಮೊಕ್ತೇಸರ ಸದಾಶಿವ ಶೆಟ್ಟಿ, ಸ್ಥಳಿಯ ಮುಖಂಡರಾದ ಡಾ.ಅತುಲ್ ಕುಮಾರ್ ಶೆಟ್ಟಿ, ವನದುರ್ಗಾ ಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವಂಡಬಳ್ಳಿ ಜಯರಾಮ ಶೆಟ್ಟಿ, ಮಾರಣಕಟ್ಟೆ ದೇವಸ್ಥಾನದ ಅಕೌಂಟೆಂಟ್ ನಾರಾಯಣ ಶೆಟ್ಟಿ, ರಘುರಾಮ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ರವೀಂದ್ರ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಉದಯ ಜಿ.ಪೂಜಾರಿ, ಪೂಜಾ ಬಾರ್& ರೆಸ್ಟೋರೆಂಟ್‌ಮಾಲಕ ಪ್ರೀತಂ ಶೆಟ್ಟಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಎಲ್ಲಾ ಅರ್ಚಕ ಕುಟುಂಬಗಳ ಸದಸ್ಯರು, ಸಿಬ್ಬಂದಿ ವರ್ಗದವರು, ಊರವರು ಅಂತಿಮ ನಮನ ಸಲ್ಲಿಸಿದರು.

administrator

Related Articles

Leave a Reply

Your email address will not be published. Required fields are marked *