• June 29, 2025
  • Last Update June 28, 2025 1:20 pm
  • Brahmavara

ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ ನಿ.ಕಾಂಗ್ರೆಸ್ ಬೆಂಬಲಿತ ಎನ್.ಮಂಜಯ್ಯ ಶೆಟ್ಟಿ ತಂಡಕ್ಕೆ ಗೆಲುವು

ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ ನಿ.ಕಾಂಗ್ರೆಸ್ ಬೆಂಬಲಿತ ಎನ್.ಮಂಜಯ್ಯ ಶೆಟ್ಟಿ ತಂಡಕ್ಕೆ ಗೆಲುವು

ಉಡುಪಿಮಿತ್ರ ಪತ್ರಿಕೆ ಸುದ್ದಿ :
ಚಿತ್ತೂರು ಜ.. ೧೮: ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ ನಿ., ವಂಡ್ಸೆ ಇದರ ಮುಂದಿನ ೫ ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎನ್. ಮಂಜಯ್ಯ ಶೆಟ್ಟಿ ನೇತೃತ್ವದ ತಂಡಕ್ಕೆ ಭರ್ಜರಿ ಜಯ ಲಭಿಸಿದೆ.
ಸಾಮಾನ್ಯ ಕ್ಷೇತ್ರದಲ್ಲಿ ಸಂಘದ ಕಳೆದ ಸಾಲಿನ ಅಧ್ಯಕ್ಷರಾಗಿದ್ದ ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ (1443 ಮತಗಳು), ಕಳೆದ ಸಾಲಿನ ಉಪಾಧ್ಯಕ್ಷರಾಗಿದ್ದ ಜಗನ್ನಾಥ ಶೆಟ್ಟಿ ಹೊಸೂರು (1260 ಮತಗಳು) ಮತ್ತೊಮ್ಮೆ ಗೆಲುವು ಸಾಧಿಸಿದರು. ಉಳಿದಂತೆ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಶೆಟ್ಟಿ ಹೊಸೂರು (1394 ಮತಗಳು), ಪ್ರಭಾಕರ ಶೆಟ್ಟಿ ಕೆರಾಡಿ (1217 ಮತಗಳು) ರಾಜಾರಾಮ ಶೆಟ್ಟಿ ಇಡೂರು (1254 ಮತಗಳು), ರಾಮಚಂದ್ರ ಮಂಜ ಮಾರಣಕಟ್ಟೆ (1370 ಮತಗಳು), ಸಂಜೀವ ಪೂಜಾರಿ ವಂಡ್ಸೆ (1223 ಮತಗಳು) ಆಯ್ಕೆಯಾದರು. ಹಿಂದುಳಿದ ವರ್ಗ (ಪ್ರವರ್ಗ ಎ) ಮೀಸಲು ಸ್ಥಾನದಿಂದ ಗುಂಡು ಪೂಜಾರಿ ಹರವರಿ (1377 ಮತಗಳು), ಹಿಂದುಳಿದ ವರ್ಗ (ಪ್ರವರ್ಗ-ಬಿ) ಮೀಸಲು ಸ್ಥಾನದಿಂದ ಶೇಖರ ಶೆಟ್ಟಿ ಬೆಳ್ಳಾಲ (1302 ಮತಗಳು), ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ರಾಜು ನಾಯ್ಕ ಇಡೂರು (1375 ಮತಗಳು), ಮಹಿಳಾ ಮೀಸಲು ಸ್ಥಾನದಿಂದ ಅಂಬಿಕಾ ಶೆಡ್ತಿ (1292 ಮತಗಳು), ಜಲಜಾಕ್ಷಿ ಶೆಡ್ತಿ (1220 ಮತಗಳು) ಜಯ ದಾಖಲಿಸಿದರು. ಪರಿಶಿಷ್ಟ ಮೀಸಲು ಸ್ಥಾನದಲ್ಲಿ ಸಂತೋಷ್ ನಾಯ್ಕ್ ಅವಿರೋಧ ಆಯ್ಕೆಯಾಗಿದ್ದರು.
ಚುನಾವಣಾಧಿಕಾರಿ ಸುಮತಿ ಕುಮಾರಿ ಎನ್.ಎಸ್., ಸಹಾಯಕ ಚುನಾವಣಾಧಿಕಾರಿ ಸಂತೋಷ್ ಕುಮಾರ್ ಚುನಾವಣೆ ನಡೆಸಿಕೊಟ್ಟರು. ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮತಿ ಶೆಟ್ಟಿ ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ಫಲಿತಾಂಶ ಘೋಷಣೆಯ ನಂತರ ಗೆದ್ದ ಅಭ್ಯರ್ಥಿಗಳನ್ನು ಕಾರ್ಯಕರ್ತರು ಇಡೂರು ಕುಂಜ್ಞಾಡಿ ತನಕ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಸಂಭ್ರಮಿಸಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡಿಬೆಟ್ಟು ಪ್ರದೀಪ್ ಕುಮಾರ್ ಶೆಟ್ಟಿ, ಮೊಳಹಳ್ಳಿ ಮಹೇಶ್ ಹೆಗ್ಡೆ, ವಂಡಬಳ್ಳಿ ಜಯರಾಮ ಶೆಟ್ಟಿ, ಉದಯ ಜಿ.ಪೂಜಾರಿ ಸೇರಿದಂತೆ ಹಲವಾರು ಪ್ರಮುಖರು
ಅಭಿನಂದಿಸಿದರು.

administrator

Related Articles

Leave a Reply

Your email address will not be published. Required fields are marked *