ಬರಹ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ:
ಯಾವುದೇ ಉತ್ಪನ್ನ ಕಂಡು ಹಿಡಿಯುವುದು ಮುಖ್ಯವಲ್ಲ. ಅದು ಗ್ರಾಹಕರ ಮನೆ ಬಾಗಿಲಿಗೆ ತಲುಪಬೇಕಾದಲ್ಲಿ ಸರಿಯಾದ ಮಾರ್ಕೆಟಿಂಗ್ ಮಾಡಬೇಕು. ಅದಕ್ಕೆ ಕ್ರೀಯಾಶೀಲ, ಸಮರ್ಥ ಯುವಕರ ಅಗತ್ಯವೂ ಬೇಕಾಗುತ್ತದೆ. ಅಂತಹ ಯುವಕರಿಗೆ ಈ ಉತ್ಪನ್ನವನ್ನು ಗ್ರಾಹಕರ ಮನೆ ಮನೆಗೆ ತಲುಪಿಸಿ ಯಶಸನ್ನು ಕಾಣುವ ಗುರಿಯು ಇರಬೇಕಾಗುತ್ತದೆ. ಇಂದು ಕರಾವಳಿಯಾದ್ಯಂತ ಸದ್ಗುರು ಆಯುರ್ವೇದ ಉತ್ಪನ್ನಗಳು ಮನೆ ಮನೆ ಬಾಗಿಲುಗಳಿಗೆ ತಲುಪಲು ಬಾರ್ಕೂರು ಗಣೇಶ್ ಶೆಟ್ಟಿಯವರ ಪರಿಶ್ರಮ ಸಾಕಷ್ಟಿದೆ. ಅವರ ಹೋರಾಟದಿಂದ ಉಡುಪಿ, ಮಂಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸದ್ಗುರು ಆಯುರ್ವೇದ ಉತ್ಪನ್ನಗಳು ಗ್ರಾಹಕರ ಮನೆ ಬಾಗಿಲುಗಳಿಗೆ ತಲುಪುತ್ತಿವೆ.

ಸ್ವದೇಶಿ ಆಯರ್ವೇದ ಉತ್ಪನ್ನಗಳ ಮಾರ್ಕೆಟಿಂಗ್ನಲ್ಲಿ ಯಶಸ್ಸು ಸಾಧಿಸಿರುವ ಗಣೇಶ್ ಶೆಟ್ಟಿಯವರು ಬಾರ್ಕೂರು ರೋಟರಿ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಡಾಡಿ ಹೋರ್ವರಮನೆ ದಿನಕರ ಶೆಟ್ಟಿ ಹಾಗೂ ಬೆಣ್ಣೆಕುದ್ರು ತಾವರಕೆರೆಮನೆ ಬೇಬಿ ಶೆಟ್ಟಿಯವರ ಪುತ್ರರಾಗಿರುವ ಗಣೇಶ್ ಶೆಟ್ಟಿಯವರು ಬೆಳೆದದ್ದು ಬೆಳಗಾವಿಯಲ್ಲಿ. ತಂದೆ ದಿನಕರ ಶೆಟ್ಟರು ಬೆಳಗಾವಿಯಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಬಾಲ್ಯದಲ್ಲೇ ತಂದೆಯನ್ನು ಕಳಕೊಂಡ ಗಣೇಶ್ ಶೆಟ್ಟಿಯವರು ಊರನ್ನು ಸೇರಿಕೊಂಡರು. ಅಮ್ಮನೊಂದಿಗೆ ಬೆಣ್ಣೆಕುದ್ರ್ರುವಿಗೆ ಆಗಮಿಸಿ ಇಲ್ಲಿಯ ಬೆಣ್ಣೆಕುದ್ರು ಅನುದಾನಿತ ಕಿ.ಪ್ರಾ.ಶಾಲೆಯಲ್ಲಿ, ಬಾರ್ಕೂರು ಬೋರ್ಡ್ ಶಾಲೆಯಲ್ಲಿ, ಬಾರ್ಕೂರು ಮೆರಿನೋಲ್ ಪ್ರೌಢಶಾಲೆಯಲ್ಲಿ ಹಾಗೂ ಬಾರ್ಕೂರು ನ್ಯಾಶನಲ್ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದರು. ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿದ ಗಣೇಶ್ ಶೆಟ್ಟಿಯವರು ಬೆಂಗಳೂರಿನ ಕದಂಬ ವೆಜ್ ಹೋಟೆಲ್ನಲ್ಲಿ ಕೆಲಸ ಮಾಡಿ ನಂತರ ಇಂದಿರಾನಗರ ಗೋಕುಲ್ ವೆಜ್ನಲ್ಲಿ ಮ್ಯಾನೇಜರ್ ಕೆಲಸ ನಿರ್ವಹಿಸಿದ್ದರು. ನಂತರ ಮೆಡಿಕಲ್ ರೆಫ್ ಆಗಿ ಪ್ರಕೃತಿ ಪ್ರಾಡಕ್ಟ್ಸ್ ಪ್ರೈಲಿ.ನ ಬೆಳಗಾವಿಯ ಪ್ರತಿನಿಧಿಯಾಗಿ ಆಯ್ಕೆಯಾದರು. ಅಲ್ಲಿ ೨ ವರ್ಷಗಳ ಕಾಲ ಕೆಲಸ ಮಾಡಿ ಪದೋನ್ನತಿ ಹೊಂದಿ ಉಡುಪಿ ವಿಭಾಗದ ಮ್ಯಾನೇಜರ್ ಹುದ್ದೆಗೇರಿದರು.
ಕಳೆದ ೧೦ ವರ್ಷಗಳ ಹಿಂದೆ ಮೆಡಿಸಿನ್ ಕಂಪೆನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಗಣೇಶ್ ಶೆಟ್ಟಿಯವರು ಕೆಲಸ ಮಾಡುತ್ತಿದ್ದಾಗ ಅವರು ಹಾನಕ್ಕೆ ಹೋದಾಗ ಮೆಡಿಕಲ್ ಶಾಪ್ವೊಂದರಲ್ಲಿ ಸ್ನಾನದ ಚಿಕ್ಕ ಸೋಪನ್ನು ಖರೀದಿಸಿ ಸ್ನಾನಕ್ಕೆ ಬಳಸಿದಾಗ ಗುಣಮಟ್ಟ ಅವರನ್ನು ಆಕರ್ಷಿಸಿತು. ಆ ಪ್ರಾಡಕ್ಟ್ ಎಲ್ಲಿಯದ್ದು ಎಂದು ಅವರು ಪರಿಶೀಲಿಸಿದರು. ಕರ್ನಾಟಕದ ಹೊಸದುರ್ಗಾ ಕಂಪೆನಿಯ ಉತ್ಪನ್ನವಾಗಿತ್ತು. ಕಸ್ಟಮರ್ಕೇರ್ ನಂಬರ್ಗೆ ಸಂಪರ್ಕಿಸಿ ಎಂ.ಡಿಯವರಲ್ಲಿ 'ಕರಾವಳಿಯಲ್ಲಿ ಈ ಸೋಪು ಎಲ್ಲಿ ಸಿಗುತ್ತೆ' ಎಂದು ವಿಚಾರಿಸಿದಾಗ 'ಕರಾವಳಿಯಲ್ಲಿ ಯಾರೂ ಇಲ್ಲ. ಮಾರ್ಕೆಟಿಂಗ್ಗೆ ಜನ ಬೇಕು' ಎಂದರು. ಮುಂದೆ ಸದ್ಗುರು ಕಂಪೆನಿಯ ಎಂ.ಡಿ.ಯವರು ಗಣೇಶ್ ಶೆಟ್ಟಿಯವರನ್ನು ಸಂಪರ್ಕಿಸಿ ಉಡುಪಿ, ಉತ್ತರಕನ್ನಡ ಹಾಗೂ ದ.ಕ ಜಿಲ್ಲೆಗಳ ಜವಾಬ್ದಾರಿಯನ್ನು ಗಣೇಶ್ ಶೆಟ್ಟಿಯವರಿಗೆ ನೀಡಿದರು.
ಕರಾವಳಿಯಲ್ಲಿ ಯಾವುದೇ ವಿತರಕರು ಇಲ್ಲದಿದ್ದರೂ ಗಣೇಶ್ ಶೆಟ್ಟಿಯವರು ಅವರ ಆತ್ಮೀಯರನ್ನೇ ವಿತರಕರನ್ನಾಗಿ ಮಾಡಿ ೩ ಜಿಲ್ಲೆಗಳಲ್ಲಿ ಸದ್ಗರು ಪ್ರಾಡಕ್ಟ್ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಾ ಹೊರಟರು. ಕರಾವಳಿಯಲ್ಲಿ ನಡೆಯುವ ಕೃಷಿ ಮೇಳ, ಹಲಸಿನ ಮೇಳ ಅಥವಾ ಯಾವುದೇ ವ್ಯವಹಾರಿಕ ಮೇಳಗಲ್ಲಿದ್ದರೂ ಅಲ್ಲಿ ಸದ್ಗುರು ಆಯುರ್ವೇದ ಸ್ಟಾಲ್ಗಳನ್ನು ಹಾಕಿ ಸದ್ಗುರು ಪ್ರಾಡಕ್ಟ್ಗಳನ್ನು ಪರಿಚಯಿಸಿದರು. ಸುಮಾರು೨೦೦ಕ್ಕು ಹೆಚ್ಚು ಕಾರ್ಯಕ್ರಮಗಳಲ್ಲಿ ಸ್ಟಾಲ್ ಹಾಕಿ ಪ್ರಚಾರ ನೀಡಿದರು. ಇದರಿಂದ ಸದ್ಗುರು ಪ್ರಾಡಕ್ಟ್ಗಳು ಜನರಿಗೆ ಹೆಚ್ಚು ಪರಿಚಯವಾಯಿತು.
ಅಂದು ಗಣೇಶ್ ಶೆಟ್ಟಿಯವರು ಬಾರಕೂರಿನ ತಮ್ಮ ಪತಂಜಲಿ ಶಾಪ್ನಲ್ಲಿ ಕೇವಲ ಎರಡು ಕೇಸ್ಗಳಿಂದ ಸದ್ಗುರು ಉತ್ಪನ್ನಗಳ ಮಾರಾಟ ಆರಂಭಿಸಿದ್ದು ಈಗ ತಿಂಗಳಿಗೆ ಕನಿಷ್ಟ 1400 ಕೇಸ್ವರೆಗೂ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಸದ್ಗುರು ಪ್ರಾಡಕ್ಟ್ಗಳ ಗುಣಮಟ್ಟವೇ ಕಾರಣ ಎಂದು ಗಣೇಶ್ ಶೆಟ್ಟಿಯವರು ಹೇಳುತ್ತಾರೆ. ಕಡಲೆಹಿಟ್ಟಿನಿಂದ ತಯಾರಿಸಿದ ಸದ್ಗುರು ಆಯುರ್ವೇದದ ಗ್ರಾಮ್ ಫ್ಲೋರ್ ಸೋಪ್, ತಲೆಗೂದಲಿಗೆ ಅಲೋವೆರಾ ಶಾಂಪು, ಸೊಳ್ಳೆಗಳ ವಿರುದ್ಧ ಹರ್ಬಲ್ ಸಾರದಿಂದ ತಯಾಸಿದ ಆವಿಕಾರಕ ‘ಗೋ ಫಾಸ್ಟ್ ಗೋಲ್ಡ್’ ಹಾಗೂ ಸೊಳ್ಳೆ ನಿವಾರಕ ಫಾಸ್ಟ್ ಕೋನ್ ಪ್ರಾಡಕ್ಟ್ಗಳು ವಿಶೇಷವಾಗಿ ಮಾರಾಟವಾಗುತ್ತಿವೆ. ಎಲ್ಲಾ ಮೆಡಿಕಲ್ ಶಾಪ್, ಸೂಪರ್ ಮಾರ್ಕೆಟ್, ಜನರಲ್ ಸ್ಟೋರ್ಗಳಲ್ಲೂ ಈ ಪ್ರಾಡಕ್ಟ್ಗಳು ಸಿಗುತ್ತ್ತಿವೆ.

ಸದ್ಗುರು ಪ್ರಾಡಕ್ಟ್ಗಳಲ್ಲಿ ಕಡ್ಲೆಹಿಟ್ಟು ಸೋಪ್ ೪ ಸೋಪ್, ೬ ಸೋಪ್ ವಾಟರ್ ಬಾಟಲ್ಗಳಲ್ಲಿ ದೊರಕುತ್ತದೆ. ಸಿಂಗಲ್ ಸೋಪ್ ಕೂಡ ಸಿಗುತ್ತದೆ. ರಕ್ತ ಚಂದನ ಸೋಪ್ನ್ನು ಕೂಡ ಗ್ರಾಹಕರು ವಿಶೇಷವಾಗಿ ಖರೀದಿಸುತ್ತಿದ್ದು ಸಿಂಗಲ್ ಸೋಪು ಹಾಗೂ ಬಾಟಲ್ನಲ್ಲೂ ಸಿಗುತ್ತಿದೆ. ಆಲೆವೆರಾ ಸೋಪು, ತುಳಸಿ ಸೋಪು ಕೂಡ ಬರುತ್ತಿದೆ. ಮಾಸ್ಕಿಟೋ ಕೋನ್ ಸಿಂಗಲ್ ಆಗಿ ಬಾಟಲ್ನಲ್ಲೂ ಬರುತ್ತದೆ. ಗೋ ಫಾಸ್ಟ್ ಲಿಕ್ವಿಡ್ ಮೆಶಿನ್ ಬರುತ್ತಿದೆ. ಆಲೆವೆರಾ ಶಾಂಪು ರೂ.2ರ ಪ್ಯಾಕೆಟ್, ರೂ.55ರ ಹಾಗೂ ರೂ.100ರ ಬಾಟಲಿಗಳಲ್ಲೂ ದೊರಕುತ್ತಿದೆ.

ಗಣೇಶ ಶೆಟ್ಟಿಯವರು 2010ರಿಂದ ಆಯುರ್ವೇದ ಉತ್ಪನ್ನಗಳನ್ನೇ ಉಪಯೋಗಿಸುತ್ತಾ ಬಂದವರು. ಪತಂಜಲಿ ಉತ್ಪನ್ನಗಳನ್ನು ಮಂಗಳೂರಿನ ಬಿಜೈಗೆ ಹೋಗಿ ಖರೀದಿಸಿಕೊಂಡು ಬರುತ್ತಿದ್ದರು. ಸ್ವದೇಶಿ ಉತ್ಪನ್ನಗಳನ್ನೇ ಖರೀದಿಸಬೇಕು, ಸ್ವದೇಶಿ ಉತ್ಪನ್ನಗಳ ಅಂಗಡಿಯನ್ನೇ ತೆರೆಯಬೇಕೆಂದು ನಿರ್ಧರಿಸಿದ್ದ ಶೆಟ್ಟರು ಸ್ವತಂತ್ರವಾಗಿ ಪತಂಜಲಿ ಉತ್ಪನ್ನಗಳ ಶಾಪ್ನ್ನು ಬಾರಕೂರು ಹಾಗೂ ಹುಣ್ಸೆಮಕ್ಕಿಯಲ್ಲಿ ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಇದರೊಂದಿಗೆ ಸದ್ಗುರು ಪ್ರಾಡಕ್ಟ್ಗಳನ್ನು ಕರಾವಳಿಯಾದ್ಯಂತ ಗ್ರಾಹಕರಿಗೆ ಸಿಗುವಂತೆ ಮಾಡಿದ್ದಾರೆ. ಸ್ವದೇಶಿ ವಸ್ತುಗಳ ಖರೀದಿ ಹಾಗೂ ಮಾರಾಟದಿಂದ ಇಲ್ಲಿಯ ಕಂಪೆನಿಗಳ ಅಭಿವೃದ್ಧಿ ಆಗಲಿದ್ದು ಸರ್ವರೂ ಸ್ವದೇಶಿ ಉತ್ಪನ್ನಗಳನ್ನು ಬಳಸುವಂತೆ ವಿನಂತಿಸಿದ್ದಾರೆ

4 ವರ್ಷಗಳಿಂದ ನಡೆಯುತ್ತಿರುವ ಹಲಸಿನ ಮೇಳದ ಯಶಸ್ಸಿನ ಹಿಂದೆ :
ಬ್ರಹ್ಮಾವರದಲ್ಲಿ ಕಳೆದ 4 ವರ್ಷಗಳಿಂದ ನಡೆಯುವ ಹಲಸಿನ ಮೇಳದ ಯಶಸ್ಸಿನ ಹಿಂದೆ ಬ್ರಹ್ಮಾವರ ಹಾಗೂ ಬಾರ್ಕೂರು ರೋಟರಿ ಸದಸ್ಯರ ಪಾತ್ರ ಸಾಕಷ್ಟಿದೆ. ಬಾರ್ಕೂರು ರೋಟರಿ ಅಧ್ಯಕ್ಷ ಗಣೇಶ್ ಶೆಟ್ಟಿ, ಬ್ರಹ್ಮಾವರ ರೋಟರಿಯ ಅಲ್ವಿನ್ ಅಂದ್ರಾದೆಯವರ ಪರಿಶ್ರಮ ಗಮನಾರ್ಹವಾದುದು.
ಗಣೇಶ್ ಶೆಟ್ಟಿಯವರು ಕಳೆದ ೪ ವರ್ಷಗಳಿಂದ ಹಲಸಿನ ಮೇಳದ ಯಶಸ್ಸಿಗೆ ಹೋರಾಡುತ್ತಾ ಬಂದಿದ್ದಾರೆ. ಸ್ಟಾಲ್ಗಳನ್ನು ನಡೆಸುವವರನ್ನು ಸಂಪರ್ಕಿಸುವ, ಸ್ಟಾಲ್ಗಳನ್ನು ಸಿದ್ಧಪಡಿಸುವ ಎಲ್ಲಾ ಪೂರ್ವ ತಯಾರಿಯಲ್ಲಿ ಶೆಟ್ಟರ ಹೋರಾಟ ಗಮನಾರ್ಹವಾದುದು.

‘ಹಲಸಿನ ಮೇಳ’ ಎಂಬ ಕಲ್ಪನೆಯನ್ನು ಬ್ರಹ್ಮಾವರದಲ್ಲಿ ಪ್ರಪ್ರಥಮವಾಗಿ ಎಲ್ಲಾ ಹಲಸಿನ ಉತ್ಪನ್ನಗಳನ್ನು ಒಂದೆಡೆ ಗ್ರಾಹಕರಿಕೆ ಸಿಗುವಂತೆ ಸ್ಟಾಲ್ಗಳನ್ನು ತೆರೆದಾಗ ಅಪಾರ ಸಂಖ್ಯೆಯ ಜನರು ಸ್ಟಾಲ್ಗಳಿಗೆ ಮುಗಿಬಿದ್ದಿದ್ದರು. ೪ ವರ್ಷಗಳಿಂದಲೂ ಈ ಮೇಳ ಯಶಸ್ವಿಯಾಗುತ್ತಾ ಬಂದಿದ್ದು ಇದರ ಹಿಂದೆ ಗಣೇಶ ಶೆಟ್ಟಿಯವರ ಪ್ರಯತ್ನವೂ ಅಡಗಿದೆ.
ಸಾಮಾಜಿಕ ಚಟುವಟಿಕೆಗಳಲ್ಲಿ ಗಣೇಶ್ ಶೆಟ್ಟಿ :
2011ರಿಂದ ಕರಾವಳಿ ಭಾಗದಲ್ಲಿ ಕೆಲಸ ಆರಂಭಿಸಿದರು. ಮಂಗಳೂರಿನಲ್ಲಿ ಮೆಡಿಕಲ್ ರೆಫ್ ಆಗಿದ್ದ ಶೆಟ್ಟರು 2014ರಿಂದ ಉಡುಪಿ ಭಾಗಕ್ಕೆ ಮ್ಯಾನೇಜರ್ ಆಗಿ ಪ್ರಮೋಷನ್ ಆದರು. ನಮ್ಮೂರು ಬಾರಕೂರು ಎಂಬ ಫೇಸ್ಬುಕ್ ಗ್ರೂಫ್ಗಳನ್ನು ಆರಂಭಿಸಿ ಕೊರೋನಾ ಸಂದರ್ಭ ೬೦೦ಕ್ಕೂ ಹೆಚ್ಚು ಕಿಟ್ಗಳನ್ನು ದಾನಿಗಳ ಸಹಕಾರದಲ್ಲಿ ಕೊಡಿಸಿದರು. 2ನೇ ಬಾರಿ 50 ಕುಟುಂಬಗಳಿಗೆ ರೂ.೪೦೦೦ ದಂತೆ ಮನೆಗೆಳಿಗೆ ತೆರಳಿ ನೀಡಿದ್ದರು. ಇಂತಹ ಸಾಮಾಜಿಕ ಕೆಲಸದ ನಡುವೆಯೇ 2016ರಲ್ಲಿ ರೋಟರಿ ಸಮಾಜಸೇವಾ ಸಂಸ್ಥೆಗೆ ಸೇರಿಕೊಂಡರು. 2024ರಲ್ಲಿ ರೋಟರಿ ಅಧ್ಯಕ್ಷರಾದರು. ರೋಟರಿ ಸದಸ್ಯರ ಸಹಕಾರದಿಂದ ಬಾರ್ಕೂರು ಬಸ್ಸ್ಟ್ಯಾಂಡ್ ನಿರ್ಮಾಣ, ರೈಲ್ವೆ ಸ್ಟೇಶನ್ ನಿರೀಕ್ಷಣಾ ಕೊಠಡಿ, ಶಾಲೆಗಳಿಗೆ ಬಾಲವನ ನಿರ್ಮಾಣ ಸೇರಿದಂತೆ ಬಾರ್ಕೂರು ಜನರಿಗೆ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಗಣೇಶ್ ಶೆಟ್ಟಿ ಮಾಡುತ್ತಾ ಬಂದಿದ್ದಾರೆ. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳತ್ತಾ ಬಂದಿರುವ ಗಣೇಶ್ ಶೆಟ್ಟರು ಇನ್ನಷ್ಟು ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ ಹಾಗೂ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ಪತ್ರಿಕೆಯ ಆಶಯ.