udupimitra.in
  • July 1, 2026
  • Last Update July 1, 2026 5:22 pm
  • Brahmavara

ನಿಧನ : ಉಳ್ಳೂರು ಮಹಾಬಲ ಶೆಟ್ಟಿ ; ವೈದ್ಯಕೀಯ ಪ್ರಯೋಗಕ್ಕೆ ದೇಹದಾನ

ನಿಧನ : ಉಳ್ಳೂರು ಮಹಾಬಲ ಶೆಟ್ಟಿ ;   ವೈದ್ಯಕೀಯ ಪ್ರಯೋಗಕ್ಕೆ ದೇಹದಾನ

ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಚಿತ್ತೂರು, ಜು.೧: ಚಿತ್ತೂರು ಮಕ್ಕಿಮನೆಯ ಉಳ್ಳೂರು ಉದ್ದಿನಹಕ್ಲುಮನೆ ಮಹಾಬಲ ಶೆಟ್ಟಿ(77)ಯವರು ಜೂ.27ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.


ವೈದ್ಯಕೀಯ ಪ್ರಯೋಗಗಳಿಗಾಗಿ ದೇಹದಾನ :
ಮಹಾಬಲ ಶೆಟ್ಟಿಯವರು ೨೦೧೭ರಲ್ಲೇ ತಮ್ಮ ಮೃತದೇಹವನ್ನು ವೈದ್ಯಕೀಯ ಪ್ರಯೋಗಗಳ ಸಲುವಾಗಿ ದಾನ ಮಾಡುವ ಬಗ್ಗೆ ಒಪ್ಪಿಗೆ ನೀಡಿದ್ದರು. ಶೆಟ್ಟರು ಮೃತರಾದ ಸುದ್ಧಿಯನ್ನು ತಿಳಿಸಿದಾಗ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಅನಾಟೊಮಿ ವಿಭಾಗದ ಸಿಬ್ಬಂದಿಗಳು ಮನೆಗೆ ಆಗಮಿಸಿ ಮೃತದೇಹವನ್ನು ಸ್ವೀಕರಿಸಿ ಕೆ.ಎಂ.ಸಿಗೆ ಸಾಗಿಸಿದರು. ಈ ಸಂದರ್ಭ ಚಿತ್ತೂರಿನ ಡಾ.ಅತುಲ್‌ಕುಮಾರ್ ಶೆಟ್ಟಿ, ಉದಯ ಜಿ.ಪೂಜಾರಿ, ರವೀಂದ್ರ ಶೆಟ್ಟಿ ಚಿತ್ತೂರು, ಪ್ರೀತಮ್ ಶೆಟ್ಟಿ, ಸೀತಾರಾಮ ಜಿ.ಪೂಜಾರಿ, ಸುರೇಶ್ ಪೂಜಾರಿ (ಅಂಬಿಕಾ), ಗುಂಡುಪೂಜಾರಿ ಹರವರಿ, ಅಬ್ದುಲ್ ಸಲಾಂ ಚಿತ್ತೂರು, ಅಬ್ದುಲ್ ರೆಹಮಾನ್, ಗಿರೀಶ್ ಚಿತ್ತೂರು ಹಾಗೂ ಇನ್ನಿತರರು ಅಂತಿಮ ನಮನ ಸಲ್ಲಿಸಿಕೊಂಡರು.

administrator

Related Articles

Leave a Reply

Your email address will not be published. Required fields are marked *

You cannot copy content of this page