ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಇತಿಹಾಸ ಪ್ರಸಿದ್ಧ ಬೈಕಾಡಿ ಶ್ರೀ ಕಾಮೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ಬ್ರಹ್ಮಕಲಶದ ಸಿದ್ಧತೆಯ ಬಗ್ಗೆ ಗ್ರಾಮಸ್ಥರ ಹಾಗೂ ಭಕ್ತರ ಸಭೆ ಜರಗಿದ್ದು ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ ಇವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

. ಪ್ರಧಾನ ಕಾರ್ಯದರ್ಶಿಗಳಾಗಿ ನಿವೃತ್ತ ಅಧ್ಯಾಪಕ ಬೈಕಾಡಿ ದಿನಕರ್ ಶೆಟ್ಟಿ, ಹಾಗೂ ರಾಘವೇಂದ್ರ ಸುವರ್ಣ ಬೈಕಾಡಿ ಕೋಶಾಧಿಕಾರಿಯಾಗಿ ಮಹೇಶ್ ಸುವರ್ಣ, ಗೌರವ ಅಧ್ಯಕ್ಷರಾಗಿ ಮಂಜುನಾಥ್ ಅಡಿಗ ಚೆನ್ನೈ ,ಮದಗ ಜೀವನ್ ಶೆಟ್ಟಿ ಕುಳಾಯಿ ಹಾಗೂ ಸಂಸದರು, ಶಾಸಕರು ಹಾಗೂ ಇನ್ನಿತರ ಗಣ್ಯರನ್ನು ಒಳಗೊಂಡು ವಿಸ್ತ್ರತ ವಾದ ಸಮಿತಿಯನ್ನು ರಚಿಸುವುದೆಂದು ನಿರ್ಣಯ ಮಾಡಲಾಯಿತು .
. ಈ ಸಭೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಹರೀಶ್ ಹೊಳ್ಳ, ಕಾರ್ಯದರ್ಶಿ ಚಂದ್ರಶೇಖರ ಬೈಕಾಡಿ ,ಆಡಳಿತ ಮಂಡಳಿಯ ಸದಸ್ಯರಾದ ಸಂತೋಷ್ ಪೂಜಾರಿ ,ಜಯಪ್ರಕಾಶ್ ಶೆಟ್ಟಿ, ಜಯಲಕ್ಷ್ಮಿ ಎ ಶೆಟ್ಟಿ, ಪ್ರದೀಪ್ ಕುಮಾರ್ ,ಅಶೋಕ್ ಶೆಟ್ಟಿಗಾರ್ ,ಪ್ರಮುಖರಾದ ಗುರುಪ್ರಸಾದ್ ರಾವ್ ,ಅರುಣ್ ಭಂಡಾರಿ, ಬಿ ವಿ ರಾವ್ ,ಸುಂದರ್ ಪೂಜಾರಿ, ಮಹೇಶ್ ಕುಂದರ್, ರಾಜೇಶ್ ತಿಂಗಳಾಯ, ಪ್ರಕಾಶ್ ಕುಂದರ್, ಶ್ರೀನಿವಾಸ್ ಶೆಟ್ಟಿ, ವಸಂತಿ ಪೂಜಾರಿ,ಮಹೇಶ್ ಕುಂದರ್ ಸಮೃದ್ಧಿ. ಸರೋಜಿನಿ ಭಂಡಾರಿ ,ಸೋಮನಾಥ್ ಸುವರ್ಣ, ಸುರೇಂದ್ರ ಹೊರ್ವ, ರಾಮಪ್ಪ ಕುಂದರ್, ಸರೋಜಿನಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.



