ಉಡುಪಿ ಮಿತ್ರ ಪತ್ರಿಕೆ ಸುದ್ಧಿ:
ಉಡುಪಿ, ಅ.೧೬: ರಾಷ್ಟ್ರೀಯ ಹೆದ್ದಾರಿ -೬೬ ಹೋರಾಟ ಸಮಿತಿ ವತಿಯಿಂದ ಬ್ರಹ್ಮಾವರದಲ್ಲಿನ ಹೆದ್ದಾರಿ ಸಮಸ್ಯೆಯ ಕುರಿತು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಉಡುಪಿಯಲ್ಲಿ ಭೇಟಿ ಮಾಡಿ ಚರ್ಚಿಸಲಾಯಿತು. ಈ ಸಂದರ್ಭ ಸಮಿತಿ ಸಂಚಾಲಕ ಬಿ.ಗೋವಿಂದರಾಜ್ ಹೆಗ್ಡೆ, ಬಿ.ಎನ್ ಶಂಕರ ಪೂಜಾರಿ, ಎಚ್.ದಯಾನಂದ ಶೆಟ್ಟಿ, ದೇವಪ್ಪ ಕಾಂಚನ್,ರಾಜು ಪೂಜಾರಿ, ವಿಜಯಕುಮಾರ್, ಆಲ್ಬರ್ಟ್ ಲೂವಿಸ್, ವಸಂತ ಶೆಟ್ಟಿ, ಅಲ್ವರಿಸ್ ಡಿಸಿಲ್ವ, ಪ್ರತೀತ್ ಹೆಗ್ಡೆ, ಬಿರ್ತಿ ಸಂತೋಷ್ ಪೂಜಾರಿ,ಸುಭಾಸ್ ಚಂದ್ರ ನಾಯಕ್, ರಿತೇಶ್ ಶೆಟ್ಟಿ, ಸಾತ್ವಿಕ್ ಭಂಡಾರಿ, ಶೋಭಿತ್, ಪ್ರಜ್ವಲ್, ಸೀತಾರಾಮ್ ಪೂಜಾರಿ ಹಾಜರಿದ್ದರು.



