ವರದಿ : ಚಿತ್ತೂರು ಪ್ರಭಾಕರ ಆಚಾಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಹಾಗೂ ಸ್ವರ್ಣಯಕ್ಷೀ ಸಾನಿಧ್ಯ ವಕ್ಕೇರಿ, ಬಡಾಕೆರೆ ಇಲ್ಲಿ ಶಿಲಾಮಯ ದೇಗುಲದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮೇ.೨೨ರಿಂದ ೨೫ರ ತನಕ ಸಂಭ್ರಮದಿಂದ ಸಂಪನ್ನಗೊಂಡಿತು.
ಈ ಪ್ರಯುಕ್ತ ಶ್ರೀ ಲಕ್ಷ್ಮೀ ಜನಾದನ ದೇವಸ್ಥಾನ ಬಡಾಕರೆಯ ಸನ್ನಿಧಾನದಿಂದ ಪೂರ್ಣ ಕುಂಭ ಕಲಶ, ಕುಣಿತ ಭಜನೆ, ಚಂಡೆ ವಾದ್ಯದ, ವಿವಿಧ ವೇಷ ಭೂಷಣಗಳೊಂದಿಗೆ ಶ್ರೀ ದೇವರ ಮೂರ್ತಿ ಮತ್ತು ವಿವಿಧ ಗ್ರಾಮದಿಂದ ಬಂದಿರುವ ಹೊರೆಕಾಣಿಕೆ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ಸಾಗಿಬಂತು.
ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ,ಮತ್ತು ವೇದಮೂರ್ತಿ ಲೋಕೇಶ್ ಅಡಿಗ ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀ ಶಾರದಾ ಪೀಠಂ ಶೃಂಗೇರಿ ಮತ್ತು ನಾಗ ಪಾತ್ರಿಗಳು ಬಡಾಕೆರೆ ಇವರು ಮೆರವಣಿಗೆಗೆ ಚಾಲನೆಯನ್ನು ನೀಡಿದರು.

ಮೇ22 ಗುರುವಾರ ಸಾನಿಧ್ಯದಲ್ಲಿ ಸಂಜೆ ೫:೩೦ಕ್ಕೆ ಪುಣ್ಯಹ ವಾಚನ, ಸ್ನಾನ ಶುದ್ದಿ, ಪ್ರಸಾದ ಶುದ್ದಿ ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ಬಲಿದಾನ, ಬಿಂಬಾದಿವಾಸ ಪೂಜೆ, ಪ್ರತಿಷ್ಠಾ ಹೋಮ, ಅಧಿವಾಸ ಹೊಮಾದಿಗಳು ಸಾನಿಧ್ಯದಲ್ಲಿ ಸಂಪನ್ನಗೊಂಡಿತು.
ಬೆಳಿಗ್ಗೆ10.15ಕ್ಕೆ ಒದಗುವ ಕರ್ಕಾಟಕ ಲಗ್ನ ಸುಮಹೂರ್ತದಲ್ಲಿ ಶ್ರೀದೇವಿಯ ಪುನರ್ ಪ್ರತಿಷ್ಠಾಪನೆ, ಸ್ವರ್ಣಯಕ್ಷೆ ಪ್ರತಿಷ್ಠೆ, ಜೀವ ಕುಂಭಾಭಿಷೇಕ ,ತತ್ವ ಕಲಶ ಸ್ಥಾಪನೆ,ತತ್ವ ಹೋಮ, ಶಿಖರ ಪ್ರತಿಷ್ಠೆ ಕಲಶಾಭಿಷೇಕ, ಮಹಾಪೂಜೆ. ಸಂಜೆ ಅಷ್ಟೋತ್ತರ ಶತ ಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ, ಪ್ರಾಯಶ್ಚಿತ ಹೋಮ ಪರಿವಾರ ದೇವರಿಗೆ ಕಲಶಾಭಿಷೇಕ ಪೂಜೆ, ಅನ್ನಪ್ರಸಾದ ವಿತರಣೆ ಸಾನಿಧ್ಯದಲ್ಲಿ ಸಂಪನ್ನಗೊಂಡಿತು.

ಮೇ.೨೪ ಶನಿವಾರದಂದು ಬೆಳಿಗ್ಗೆ ಕಲಶಾಧಿವಾಸ ಹೋಮ, ಬ್ರಹ್ಮಕಲಶಾಭಿಷೇಕ ಮಹಾಪೂಜೆ, ಮಂತ್ರಾಕ್ಷತೆ ಹಾಗೂ ಅನ್ನಸಂತರ್ಪಣೆ ಹಾಗೂ ಬೆಳಿಗ್ಗೆ ೧೧-೦೦ಕ್ಕೆ ಧಾರ್ಮಿಕ ಸಭಾಕಾರ್ಯಕ್ರಮ ಹಾಗೂ ಮಧ್ಯಾಹ್ನ ಗಂಟೆ 12.00ಕ್ಕೆ ಅನ್ನಸಂತರ್ಪಣೆ. ಮಧ್ಯಾಹ್ನ ಗಂಟೆ ೦2.30ಕ್ಕೆ ಮನು ಹಂದಾಡಿ ಹಾಗೂ ತಂಡದವರಿಂದ ನಗೆಸುಗ್ಗಿ ಕಾರ್ಯಕ್ರಮ ಸಂಜೆ ಗಂಟೆ 5.00ಕ್ಕೆ ಯಕ್ಷಗಾನ ತಾಳ ಮದ್ದಲೆ, ಸಂಜೆ ಗಂಟೆ 7.00ಕೆ ಕಡಿಕೆ ಶಾಲೆಯ ಮಕ್ಕಳಿಂದ ಮಹಿಷ ಮರ್ದಿನಿ ಎಂಬ ಪುಣ್ಯ ವ್ಯಾಖ್ಯಾನವನ್ನು ನಾಟಕ ರೂಪದ ನೃತ್ಯ ಪ್ರದರ್ಶನ ಹಾಗೂ ಸ್ಥಳೀಯ ಬಾಲಕಿಯರಿಂದ ನಾಟ್ಯ ಪ್ರದರ್ಶನ, ಮಂಗಳೂರು ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಕಾರಣೇಕ ಕ್ಷೇತ್ರದ ಪುಣ್ಯ ಕಥಾನಕದ ನೃತ್ಯರೂಪಕ ಬಿಡುವನೆ ಬ್ರಹ್ಮಲಿಂಗ ಸಾಂಸ್ಕೃತಿಕ ವೈಭವ ಜರುಗಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಶ್ರೀಮತಿ ಮತ್ತು ಶ್ರೀ ಮಹಾಬಲೇಶ್ವರ ಕಾರಂತರು ಹಾಗೂ ಕುಟುಂಬಸ್ಥರು,
ಆಡಳಿತ ಮಂಡಳಿ ಅಧ್ಯಕ್ಷರು ಚಂದ್ರಪ್ರಕಾಶ್ ಶೆಟ್ಟಿ ಉಪಾಧ್ಯಕ್ಷರು, ವಿಜಯ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಸಂಜೀವ ಶೆಟ್ಟಿ ಹಾಗೂ ಸರ್ವಸದಸ್ಯರು ಹಾಗೂ ಗ್ರಾಮಸ್ಥರು ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು, ನಿತೀಶ್ ಶೆಟ್ಟಿ ಜಾಡ್ಡಾಡಿ, ಉಪಾಧ್ಯಕ್ಷರು ಅನಿಲ್ ಶೆಟ್ಟಿ, ಕಾರ್ಯದರ್ಶಿ ನಾಗರಾಜ್ ಶೆಟ್ಟಿ ಹಾಗೂ ಸರ್ವಸದಸ್ಯರು, ಉಪಸ್ಥಿತರಿದ್ದರು
