ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಉಡುಪಿ ಅಜ್ಜರಕಾಡು ಮೈದಾನದಲ್ಲಿ ಡಿ.೧೩ರಂದು ನಡೆದ ರಾಷ್ಟ್ರೀಯ ಕರಾಟೆ ಸ್ಪರ್ಧೆಯ ಕಟಾ ವಿಭಾಗದಲ್ಲಿ ಶ್ರೀನಿಧಿಯವರು ಪ್ರಥಮ ಸ್ಥಾನ ಗಳಿಸಿ ಆಸ್ಟ್ರೇಲಿಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶ್ರೀ ಸೋಮನಾಥ ಸುವರ್ಣ, ಡಾ ವಿಜಯಲಕ್ಷ್ಮಿ ಇವರು ಕರಾಟೆ ತರಬೇತಿ ನೀಡಿರುತ್ತಾರೆ. ಹೆಬ್ರಿ ಶಿವಪುರ ಬ್ಯಾಣ ಶ್ರೀಮತಿ ಗೀತಾ ಉದಯ ನಾಯ್ಕ ಇವರ ಪುತ್ರಿಯಾಗಿರುವ ಶ್ರೀನಿಧಿ ಹೆಬ್ರಿ ಪಿಎಂಶ್ರೀ ಸರಕಾರಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ೭ನೇ ತರಗತಿಯಲ್ಲಿ ಓದುತ್ತಿದ್ದಾರೆ.




