ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಮೇ.೧೦:
ಪೇತ್ರಿಯಲ್ಲಿ ಇಂಟೀರಿಯರ್ ಸೊಲ್ಯುಶನ್ ಪ್ಲೈವುಡ್ & ಹಾರ್ಡ್ವೇರ್ ಮೇ.೧೦ರಂದು ಬೆಳಿಗ್ಗೆ ಆಶ್ಲವಿ ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆಗೊಂಡಿತು.
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿ. ಕೊಕ್ಕರ್ಣೆ ಇದರ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಪೇತ್ರಿ ಮಡಿ ರೇಣುಕಾ ಕನ್ಸಟ್ರಕ್ಷನ್ ಸಿವಿಲ್ ಇಂಜೀನಿಯರ್ ಸಂತೋಷ ಶೆಟ್ಟಿ, ಅನಿಲ್ ಡಿಸಿಲ್ವಾ ಪೇತ್ರಿ, ಕೊಕ್ಕರ್ಣೆ ರೈತರ ಸೇವಾ ಸಹಕಾರಿ ಸಂಘದ ಸಂತೆಕಟ್ಟೆ ಶಾಖೆಯ ಶಾಖಾ ಪ್ರಬಂಧಕ ಶಂಕರ ಪೂಜಾರಿ ಮಾರಾಳಿ, ಪೇತ್ರಿ ಶ್ರೀ ದುರ್ಗಾ ಜ್ಯುವೆಲ್ಲರಿ ಮಾಲಕ ಸುರೇಶ್ ಆಚಾರ್ಯ, ಆಯ್ಕ ಸನ್ಮೈಕ್ ಡಿಸ್ಟ್ರಿಬ್ಯೂಟರ್ ಗೋಪಾಲಕೃಷ್ಣ ಪೈ, ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಆಚಾರ್ಯ, ನಾಲ್ಕೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಪ್ರತಿಮಾ ರವಿಚಂದ್ರ ಆಚಾರ್ಯ ಭಾಗವಹಿಸಿದ್ದರು.
ಇಂಟೀರಿಯರ್ ಸೊಲ್ಯುಶನ್ ಪ್ಲೈವುಡ್ & ಹಾರ್ಡ್ವೇರ್ ಮಾಲಕ ನಾಗೇಂದ್ರ ಆಚಾರ್ಯ ಸ್ವಾಗತಿಸಿ ವಂದಿಸಿದರು. ಪತ್ರಕರ್ತ ಪ್ರಭಾಕರ ಆಚಾರ್ಯ ನಿರೂಪಿಸಿದರು.



