• May 10, 2026
  • Last Update May 7, 2026 4:06 pm
  • Brahmavara

ಬ್ರಹ್ಮಾವರ ಮಥುರಂ ಕೆಫೆ ಉದ್ಘಾಟನೆ

ಬ್ರಹ್ಮಾವರ ಮಥುರಂ ಕೆಫೆ ಉದ್ಘಾಟನೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ

ಉಡುಪಿ ಮಿತ್ರ ಪತ್ರಿಕೆ ಸುದ್ದಿ :
ಬ್ರಹ್ಮಾವರ, ಮಾ.೧: ಬ್ರಹ್ಮಾವರ ಕೃಷಿಕೇಂದ್ರದ ಎದುರಿನ ಲಕ್ಷ್ಮೀ ಎಂಪಾರ್ ಬೋರ್ಡಿಂಗ್ & ಲಾಡ್ಜಿಂಗ್ ಬಿಲ್ಡಿಂಗ್ ನಲ್ಲಿ ಮಥುರಂ ಕೆಫೆ ಶುದ್ದ ಸಸ್ಯಹಾರಿ ಹೋಟೆಲ್ ಮಾ.೧ರಂದು ಉದ್ಘಾಟನೆಗೊಂಡಿತು.


ಉದ್ಘಾಟನೆಯ ಸಂದರ್ಭ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ ಸುವರ್ಣ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಧನಂಜಯ ಶೆಟ್ಟಿ, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೊಳ್ಕೆಬೈಲು ಕಿಶನ್ ಹೆಗ್ಡೆ, ಲಕ್ಷ್ಮೀ ಎಂಪೋರಿಯಂ ಮಾಲಕ ದೇವಿಪ್ರಸಾದ್ ಶೆಟ್ಟಿ, ಬ್ರಹ್ಮಾವರ ಸ್ಫೋರ್ಟ್ಸ್ ಕ್ಲಬ್ ಮಾಜಿ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಮಘದ ಅಧ್ಯಕ್ಷ ಗಂಗಾಧರ ಶೆಟ್ಟಿ, ಉದ್ಯಮಿ ಬಿಲ್ಲಾಡಿ ಸುರೇಶ್ ಶೆಟ್ಟಿ, ಶ್ರೀಮತಿ ವೀಣಾ ಶೆಟ್ಟಿ ಉಡುಪಿ, ಪಾಲುದಾರರಾದ ಕಿರಣ್ ಕುಮಾರ್ ಶೆಟ್ಟಿ ಹೊಳೆಬಾಗಿಲು, ಸಂಪತ್‌ಕುಮಾರ್ ಶೆಟ್ಟಿ ಶಾನಾಡಿ, ಪ್ರಥ್ವಿಜ್ ಶೆಟ್ಟಿ ಹೊನಕಲ್, ಸುಧೀರ್ ಶೆಟ್ಟಿ ನೀಲಾವರ ಇನ್ನಿತರರು ಉಪಸ್ಥಿತರಿದ್ದರು.
ಪಾಲುದಾರ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಸ್ವಾಗತಿಸಿ ವಂದಿಸಿದರು. .

administrator

Related Articles

Leave a Reply

Your email address will not be published. Required fields are marked *

You cannot copy content of this page