ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಫೆ.೧೧: ಬ್ರಹ್ಮಾವರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರಕ್ಕೆ ಫೆ.೧೨ರಂದು ಸಂಜೆ ಶಿಲಾ ಮೆರವಣಿಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಗೋವಿಂದರಾಜ್ ಹೆಗ್ಡೆ ತಿಳಿಸಿದ್ದಾರೆ.

ಶಿಲಾ ಮೆರವಣಿಗೆಯು ಸಂಜೆ ೪.೩೦ಕ್ಕೆ ಬ್ರಹ್ಮಾವರ ಕುಂಜಾಲು ಕ್ರಾಸ್ ಟ್ಯಾಕ್ಸಿ ಸ್ಟ್ಯಾಂಡ್ ಬಳಿಯಿಂದ ಆರಂಭಗೊಳ್ಳಲಿದೆ. ಹೆದ್ದಾರಿ ಮಾರ್ಗವಾಗಿ ಸಾಗಿ ಬೈಪಾಸ್ ಮೂಲಕ ರಥಬೀದಿ ಮೂಲಕ ದೇವಸ್ಥಾನ ಪ್ರವೇಶಿಸಲಿದ್ದು ಈ ಸಂದರ್ಭ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಿ. ಗೋವಿಂದರಾಜ್ ಹೆಗ್ಡೆ ಕೊಂಡಿದ್ದಾರೆ.



